ಯುವಕರು ಚಿತ್ರಕ್ಕೆ u/ಚಿ ಸರ್ಟಿಫಿಕೆಟ್
Posted date: 09 Fri, Feb 2024 09:17:45 AM
ರುದ್ರಾಕ್ಷಿ ಪ್ರೊಡಕ್ಷನ್ಸ್  ಲಾಂಛನದಲ್ಲಿ ಡಾ.ಸುಕನ್ಯ ಹಿರೇಮಠ್  ಮತ್ತು ಪವಿತ್ರ ಹಿರೇಮಠ್ ನಿರ್ಮಿಸಿರುವ ಯುವಕ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಾ.ಬಿ.ಆರ್. ಹಿರೇಮಠ್ ರವರ ಮೂಲ ಪರಿಕಲ್ಪನೆಯನ್ನು ಕಥೆಯಾಗಿಸಿ ಚಿತ್ರಕಥೆ-ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನವನ್ನು ಡಾ||ಗುಣವಂತ ಮಂಜೂರ್ ನಿರ್ವಹಿಸಿದ್ದಾರೆ. 6 ಹಾಡುಗಳುಳ್ಳ ಈ ಚಿತ್ರವು ಬೆಂಗಳೂರು, ದೇವನಹಳ್ಳಿ, ತಲಕಾಡು, ಮುಂತಾದೆಡೆಗಳಲ್ಲಿ ನಡೆದಿದೆ. ಶ್ರೀ.ಚೇತನ್, ಪವಿತ್ರಾ, ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಾದಕ ವಸ್ತುಗಳ ವ್ಯಸನದಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಮತ್ತು ಯುವಜನತೆ ಇದರಿಂದ ದಾರಿ ತಪ್ಪುತ್ತಿರುವ ಬಗ್ಗೆ ವಿವರಿಸಲಾಗಿದೆ. ಈ ಚಟಕ್ಕೆ ಬಿದ್ದಾಗ ದೇಶಕ್ಕೂ ಹಾನಿ, ದೇಹಕ್ಕೂ ಹಾನಿ ಉಂಟಾಗುವುದೆಂಬ ಸಂದೇಶವನ್ನು ನೀಡುವ ಕಥೆಯನ್ನು ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ರಂಗಭೂಮಿ ಮತ್ತು ಹೊಸ ಕಲಾವಿದರುಗಳು ೫೦ಕ್ಕೂ ಹೆಚ್ಚು ಜನ ಪಾತ್ರವಹಿಸಿದ್ದಾರೆ. ಈ ಚಿತ್ರಕ್ಕೆ ಬಿ.ಬಲರಾಂ -ಸಂಗೀತ, ಬಸಯ್ಯ ಹಿರೇಮಠ್-ಛಾಯಾಗ್ರಹಣ, ಹೆಚ್.ಸಿ. ಕುಮಾರ್-ಸಂಕಲನ, ತಾರಾಗಣದಲ್ಲಿ ಶ್ರೀಚೇತನ್, ಪವಿತ್ರಾ ಹಿರೇಮಠ್, ರೋಹಿಣಿ, ಸಿ.ಸೋಮಶೇಖರ್, ಗುಣವಂತ ಮಂಜು, ಚನ್ನಕೇಶವ, ಸಮರ್ಥ, ಶಿವಕುಮಾರ್ ನಾಗರನವಿಲೆ, ಪ್ರದೀಪ್ ಪುಟ್ಟ, ಪುಷ್ಪಲತಾ, ಮಹೇಶ್ ಸಾಗರ, ಬಲಾಮ್, ರುದ್ರಮುನಿ ಮುಂತಾದವರು ಅಭಿನಯಿಸಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed